7
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಸ್ ನಿಲ್ದಾಣದಲ್ಲಿ ಬುದುವಾರ ಸಂಜೆ ನಡೆದಿರುವ ಘಟನೆ ಇದಾಗಿದ್ದು, ಬಸ್ಟಾಂಡ್ ನಲ್ಲಿ ನಿಲ್ಲಿಸಿದ್ದ ಬಸ್ಸು ಏಕಾಏಕೀ ಹಿಮ್ಮುಖವಾಗಿ ಚಲಿಸಿ ಈ ಅವಘಡ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯಿಂದ ನಾಲ್ಕಕ್ಕೂ ಹೆಚ್ಚು ಕಾರುಗಳು, ಸೇರಿದಂತೆ ಒಂದು ಬೈಕ್ ಜಖಂಗೊಂಡಿದ್ದು ಸದ್ಯ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ,
ಘಟನೆ ಸಂಭಂದ ಖಾಸಗಿ ಬಸ್ ಡ್ರೈವರ್ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

