350
ಶಿವಮೊಗ್ಗ: ಜಿಲ್ಲೆ ಭದ್ರಾವತಿ ತಾಲೂಕಿನ ಸಿತಾರಾಂ ಪುರ ಹಾಗೂ ಕುಡ್ಲುಗೆರೆ ಮಧ್ಯದಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದೆ,
ಕಾಸಗಿ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಭದ್ರಾವತಿಯಿಂದ ಚನ್ನಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಅರೆಬಿಳ್ಚಿಯಿಂದ ಭದ್ರಾವತಿಗೆ ಆಗಮಿಸುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಹಿನ್ನೆಲೆ ಬೈಕ್ ಸವಾರ ಸಾವನ್ನಪ್ಪಿದರೆ, ಬೈಕ್ ನಲ್ಲಿದ್ದ ರಾಜಪ್ಪ ಕುಟುಂಬದವರರಾದ ಅವರ ಪತ್ನಿ ಹಾಗೂ ಮೂವರು ಮಕ್ಕಳು ಗಂಭಿರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಬಸ್ಸಿನಲ್ಲಿದ ಸುಮಾರು 15 ಜನ ಪ್ರಯಾಣಿಕರಿಗೆ ಗಂಭೀರ ಗಾಯಾಗಳಾಗಿದ್ದು ಶಿವಮೊಗ್ಗದ ಮೇಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

