46
ವೇದಿಕೆ ಮೇಲೆ ಹತ್ತಲ್ಲ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ ಭದ್ರಾವತಿಯಲ್ಲಿ ಘಟನ
ಶಿವಮೊಗ್ಗ ಜಿಲ್ಲೆಯ ಭದ್ರಾವತಿನಗರದ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ದಿವಂಗತ ಎಸ್ ಜಾನಕಿ ಸ್ಮರಣಾರ್ಥ ಕಾಯ್ರಕ್ರಮವೊಂದನ್ನು ಆಯೋಜಿಸಲಾಗಿತ್ತು,
ಇದೇ ಕಾರ್ಯಕ್ರಮದಲ್ಲಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಪೊಲೀಸ್ ಉಮೇಶ್ ರವರು ಅನ್ನ ಸಂತರ್ಪಣೆಯನ್ನು ನಡೆಸುತ್ತಿದ್ದರು.
ಈ ಸಮಯ ಪೋಲಿಸ್ ಉಮೇಶ್ ರನ್ನು ಕಾರ್ಯಕ್ರಮದ ವೇದಿಕೆ ಮೇಲೆ ಬರುವಂತೆ ಕರೆ ಕೊಟ್ಟಿದ್ದಾರೆ.
ಆದರೆ ಕೆಲವಿಚಾರಕ್ಕೆ ಮನಸ್ಥಾಪ ಹೊಂದಿದ್ದ ಉಮೇಶ್ ವೇದಿಕೆಯನ್ನು ಹತ್ತಲು ನಿರಾಕರಿಸಿದ್ದಾರೆ.
ಇದೇ ವಿಚಾರವಾಗಿ ಮಾತಿಗೆ ಮಾತು ಬೇಳೆದು ದೊಡ್ಡ ಮಟ್ಟದ ಗಲಾಟೆಯಾಗಿದೆ, ಈ ಹೊಡೆದಾಟದಲ್ಲಿ ಪೋಲಿಸ್ ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಮಾರಾಣಾಂತಿಕ ಹಲ್ಲೆಯಾಗಿದೆ ಎಂದು ಪೋಲಿಸ್ ಉಮೇಶ್
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

